ಈ ಪುಟವನ್ನು ಪ್ರಕಟಿಸಲಾಗಿದೆ

92
ಪ್ರಭುದೇವರು ಬಸವಣ್ಣನವರನ್ನು ಅನುಗ್ರಹಿಸಿ ಅವರ ಮನದ ಕಾಳಿಕೆಯನ್ನು ಕಳೆಯಲು, ಹಾಗೂ ಮತಪ್ರಚಾರವನ್ನು ಸಂಘಟಿಸಲು, ಕಲ್ಯಾಣಕ್ಕೆ ಬಂದದ್ದು. ಅವರು ಮೊದಲು ಬಸವಣ್ಣನವರಲ್ಲಿ ನೆಲೆಸಿದ್ದ 'ಮಾಟ-ಕೂಟ'ದ ಭ್ರಾಂತಿಯನ್ನು ಬಿಡಿಸಿದರು. ಮಹಾಮೇರುವಿನ ಮರೆಯಲ್ಲಿದ್ದು ಭೂತನ ನೆಳಲನಾಚರಿಸುವ ಕರ್ಮಿ ನೀ ಕೇಳಾ ! ಅದು ಆ ಮಹಾಲಿಂಗಕ್ಕೆ ಮಜ್ಜನವೆಂದೆನೋ, ಪರಿಮಳಲಿಂಗಕ್ಕೆ ಪತ್ರಪುಷ್ಟಗಳೆಂದೇನೋ, ಜೀವ ಜ್ಯೋತಿರ್ಲಿಂಗಕ್ಕೆ ಧೂಪದೀಪಾರ್ತಿ ಎಂದೇನೋ, ಅಮೃತಲಿಂಗಕ್ಕೆ ಆರೋಗಣವೆ೦ದೆನೋ, ಮಹೇಶ್ವರನೆಂಬ ಲಿಂಗದಂತವ ಬಲ್ಲವರಾರೋ? ಎಂಬುದಾಗಿ ಬೋಧಿಸಿದರು. ಅವರು ಬಸವಣ್ಣನವರಿಗೆ ಪ್ರಾಣದಲ್ಲಿಯೇ 'ಜ್ಯೋತಿರ್ಲಿಂಗ'ವನ್ನು ಕಾಣಲು ಕಲಿಸಿದರು. ಅಂಥ ಅನುಭಾವದಿಂದ ಆ ದಿವ್ಯ ಆನಂದದಲ್ಲಿನಲಿಯಲು, ಆ ಮಹಾಬೆಳಕಿನಲ್ಲಿ ಸಮರಸರಾಗಿ ಬಯಲಿಗೆ ಬಯಲಾಗುವ ಬಗೆಯನ್ನು ಅರುಹಿದರು. ಆ ಅನುಭಾವವನ್ನು ಅವರಿಗೆ ದಯಪಾಲಿಸಿದರು. ಇದು ಬಸವಣ್ಣನವರ ಬೆಳೆದ ಭಕ್ತಿಯ ಪರಿಪಾಕ-ಪೂರ್ಣತೆ. ಅನುಭಾವದ ಶಿಖರವನ್ನು ಇಂತು ಬಸವಣ್ಣನವರು ಮುಟ್ಟಿದ ಬಗೆಯ ಕೆಲ ವಿವರಗಳನ್ನು ಮುಂದೆ ಕಾಣಿಸಲು ಯತ್ನಿಸಲಾಗಿದೆ.
ವಿವೇಕೋದಯ:
ಸದ್ಗುರುಗಳ ಬೋಧೆ ಪ್ರಸಾದಗಳ ಫಲವಾಗಿಯೂ ಸ್ವಂತ ಆಳವಾದ ಆಲೋಚನೆಯ ಫಲವಾಗಿಯೂ ಬಸವಣ್ಣನವರಲ್ಲಿ ವಿವೇಕವು ಮೈದಳೆದು ಸಂಗಮನಾಥನೇ ಏಕೋದೇವನೆಂಬುದು ಅವರ ಬುದ್ದಿಗೆ ಹೊಳೆಯಿತು.
“ಸ್ವಾಮಿ ನೀನು ಶಾಶ್ವತ ನೀನು
ಎತ್ತಿದೆ ಬಿರುದ ಜನವೆಲ್ಲರಿಯಲು.
“ಮಹಾದೇವ, ಮಹಾದೇವ'
ಇಲ್ಲಿಂದ ಮುಂದೆ ಶಬ್ದವಿಲ್ಲ.
ಪಶುಪತಿ ಜಗಕ್ಕೆ ಏಕೋದೇವ.