ಈ ಪುಟವನ್ನು ಪ್ರಕಟಿಸಲಾಗಿದೆ

94

ಅದೇ ಮೇರೆಗೆ,

ನೀನೊಲಿದರೆ ಕೊರಡು ಕೊನರುವದಯ್ಯಾ,
ನೀನೊಲಿದರೆ ಬರಡು ಹಯನಹುದಯ್ಯಾ,
ನೀನೊಲಿದರೆ ವಿಷವು ಅಮೃತವಹುದಯ್ಯಾ,
ನೀನೊಲಿದರೆ ಸಕಲ ಪದಾರ್ಥ ಇದಿರಲಿರ್ಪುದು,
ಕೂಡಲಸಂಗಮದೇವಾ !

ಇಂಥ ಪ್ರಭಾವವು ಭಗವಂತನ ಕರುಣದಲ್ಲಿ ಪ್ರಸಾದದಲ್ಲಿ ಆದುದರಿಂದ ಬಸವಣ್ಣನವರು ಆತನಿಗೆ ಅನನ್ಯಭಾವದಿಂದ ಮೊರೆ ಇಟ್ಟರು. ತಮ್ಮನ್ನು ಕರುಣಿಸಲು ಪ್ರಾರ್ಥಿಸಿದರು.

ಭವರೋಗವೈದ್ಯನೆಂದು ನಾ ನಿನ್ನ ಮೊರೆಹೊಕ್ಕೆ
ಭಕ್ತಿದಾಯಕ ನೀ ಕರುಣಿಸು ಲಿಂಗ ತಂದೆ !
“ಜಯ ಜಯ ಶ್ರೀಮಹಾದೇವ! ಜಯ ಜಯ ಶ್ರೀಮಹಾದೇವ!
ಜಯ ಜಯ ಶ್ರೀ ಮಹಾದೇವ ಎನ್ನುತ್ತಿದ್ದಿತೆನ್ನ ಮನವು.
ಕೂಡಲಸಂಗಮದೇವಂಗೆ ಶರಣೆಂದಿತ್ತೆನ್ನ ಮನವು.

ಎಂದು ಅರುಹಿದರು ಬಸವಣ್ಣನವರು. ಆದರೆ ಈ ಬಗೆಯ ಆರಾಧನೆಯಲ್ಲಿ ಕೆಲಕಾಲ ಕಳೆದ ಮೇಲೆ, ಬಸವಣ್ಣನವರ ಭಕ್ತಿಯ ಕಾವು ಕಡಿಮೆ ಆಯಿತು. ಸಾಧನವು ಯಾಂತ್ರಿಕವಾಯಿತು. ಅದನ್ನು ಕಂಡು ಅವರು,

ಅಭ್ಯಾಸವೆನ್ನ ವರ್ತಿಸಿತ್ತಯ್ಯಾ : ಭಕ್ತಿ ಸಾಧ್ಯವಾಗದು,
ನಾನೇವೆನಯ್ಯಾ?
ಆ ನಿಮ್ಮ ಮನ ಬೊಗುವನ್ನಕ್ಕ.
ನೀವೆನ್ನ ಮನ ಬೊಗುವನ್ನಕ್ಕ.
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ.
ಕೂಡಲಸಂಗಮದೇವ !