ಈ ಪುಟವನ್ನು ಪ್ರಕಟಿಸಲಾಗಿದೆ
95

ಎಂಬಂತೆ ಶರಣರಿಗೆ ಶರಣಾಗತರಾಗಲು ಬಯಸಿದರು. ಶರಣರು ತಮ್ಮ ಕಾಯಗುಣವನ್ನು ಹೇಗೆ ಅಳಿಸಿದರು, ಭಕ್ತಿಭಾವವನ್ನು ಮರಳಿ ಹೇಗೆ ಬೆಳೆಸಿದರು? ಎಂಬುದನ್ನು ಅವರಿಂದ ಕೇಳಿಕೊಂಡು, ತಮ್ಮಲ್ಲಿಯ ದೇಹಭಾವವನ್ನು ಅಳಿಸಿ, ಭಕ್ತಿಭಾವವನ್ನು ಬೆಳೆಸಲು ಯತ್ನಿಸಬೇಕೆಂದು ಅವರು ಬಗೆದರು.
ಅಂತರ್ನಿರೀಕ್ಷಣ :
“ನಿನ್ನ ಕೃಪೆಯ ಬಲದಿಂದ ನಾನು ಮೇಲಕ್ಕೆ ಏರುವೆ. ಆದರೆ ನನ್ನ ಭಾರದ ಫಲವಾಗಿ ಕೆಳಕ್ಕೆ ಜಾರುವೆ (You lift me up with your grace; but I come down with my weight) ಎಂದು ಓರ್ವ ಸತ್ಪುರುಷರು ಉಸಿರಿರುವರು. ಪರಮಾತ್ಮನ ಕರುಣವು ಮಾನವನದಲ್ಲಿ ವಿವೇಕವನ್ನು ಎಚ್ಚರಿಸಿ ಅದರ ಮುಖಾಂತರ ಆತನನ್ನು ತನ್ನೆಡೆ ಸೆಳೆಯುವದು. “ನಾನವರಿಗೆ ಸರಿಯಾದ ಬುದ್ದಿಯನ್ನು ದಯಪಾಲಿಸುವೆ. ಅದರ ನೆರವಿನಿಂದ ಅವರು- ಭಕ್ತರು- ನನ್ನೆಡೆ ಬರುವರು. (ದದಾಮಿ ಬುದ್ಧಿಯೋಗಂ ತಂ ಏನ ಮಾಮುಪಯಾಂತಿ ತೇ) ಎಂದು ಭಗವಂತನು ಗೀತೆಯಲ್ಲಿ ಅರುಹಿರುವ ಈ ರೀತಿ ವಿವೇಕವು ಭಗವಂತನ ಆಯುಧವಿರುವಂತೆ, ಕಾಮವು ಮಾಯೆಯ ಆಯುಧ, ಮಾಯೆಯ ಮೋಹಕತೆಯು ಕಾಮದ ಮುಖಾಂತರ ಮನುಜನನ್ನು ತನ್ನೆಡೆ ಸೆಳೆಯುವದು. ಮಾನವನ ಕಾಯ-ಇಂದ್ರಿಯ- ಮನಗಳು ಕಾಮದ ಅಭಿಷ್ಠಾನಗಳು, ಆಶ್ರಯಸ್ಥಾನಗಳು. ಕಾಮವು ಅವುಗಳಲ್ಲಿ ಬಗೆಬಗೆಯ ವಿಕಾರಗಳನ್ನು ಹುಟ್ಟಿಸಿ ಮಾನವನನ್ನು ಮಾಯೆಯ ಪಾಶದಲ್ಲಿ ಸಿಲುಕಿಸುವದು. ಈ ರೀತಿ ರಾಮಜನಿತ ವಿವೇಕವು ಹಾಗೂ ಕಾಮಜನಿತ ವಿಕಾರವು- ಇವು ಮಾನವನ ಅಂತರಂಗವನ್ನು ಕಲಹದ ರಂಗವನ್ನಾಗಿ ಮಾರ್ಪಡಿಸುವವು. ಅಲ್ಲಿ ವಿವೇಕ ವಿಕಾರಗಳಲ್ಲಿ ಸತತವಾಗಿ ಯುದ್ದವು ನಡೆಯುವದು. ವಿವೇಕವು ಪ್ರಬಲ ಇರುವಾಗ ಉನ್ನತಿ, ವಿಕಾರದ ಮೇಲುಗೈಯಾದಾಗ ಅವನತಿ. ಈ ವಿಷಯವನ್ನು ಶರಣರಾದ ಸದ್ಗುರುಗಳಿಂದ ಅರಿತು, ಬಸವಣ್ಣನವರು ಸರಿಯಾದ