ಈ ಪುಟವನ್ನು ಪ್ರಕಟಿಸಲಾಗಿದೆ

146

ನಮ್ಮ ನುಡಿಯು ಸತ್ಯವಾದುದಿರುವಂತೆ, ಪ್ರಿಯವಾದುದೂ ಇರಬೇಕು. ಅಪ್ರಿಯವಾದುದು-ಕಠೋರವಾದುದು ಇರಕೂಡದು.

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ।
ನ ಬ್ರೂಯಾತ್ ಸತ್ಯಮಪ್ರಿಯಮ್ ॥
ಪ್ರಿಯಂ ಚ ನಾನೃತಂ ಬ್ರೂಯಾತ್ ।
ಏಷ ಧರ್ಮ: ಸನಾತನ ॥

ಸತ್ಯವನ್ನು ನುಡಿಯಿರಿ. ಪ್ರಿಯವನ್ನು ನುಡಿಯಿರಿ. ಅಪ್ರಿಯವಾದ ಸತ್ಯವನ್ನೂ ಪ್ರಿಯವನ್ನೂ ಅಸತ್ಯವನ್ನೂ ನುಡಿಯದಿರಿ. ಇದೇ ಸನಾತನ ಧರ್ಮ ! ಬಸವಣ್ಣನವರು ತಮ್ಮ ವಚನವೊಂದರಲ್ಲಿ ಇದನ್ನೇ ಉಸುರಿರುವರು :

ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ ಅಹುದಹುದೆ'ನಬೇಕು.

ನಮ್ಮ ನುಡಿಯಲ್ಲಿ ಮುತ್ತಿನ ಸೌಂದರ್ಯ, ಮಾಣಿಕ್ಯದ ತೇಜ, ಸ್ಪಟಿಕದ ನಿರ್ಮಲತನ, ಭಾವಪೂರ್ಣತೆ ಇವೆಲ್ಲ ಗುಣಗಳಿರಬೇಕು. ಅದು ಸತ್ಯವೂ ಪ್ರಿಯವೂ ಹಿತಕರವೂ ಇರಬೇಕು. ಆದರೆ ನಡೆಯಿಲ್ಲದ ನುಡಿ ಭಗವಂತನಿಗೆ ಸೇರುವದಿಲ್ಲ. ಅವನು ನಡೆಯನ್ನು ನೋಡುವ, ಬರೀ ನುಡಿಯನ್ನಲ್ಲ. ಸರ್ವಜ್ಞನು ಉಸುರಿದ ಮೇರೆಗೆ :

ಮಾತೆ ಮಾಣಿಕ ಮತ್ತು ಮಾತಿನಿಂ ಸದರವು ।
ಮಾತಾಡಿದಂತೆ ನಡೆದಾತ, ಜಗವೆಲ್ಲ ।
ಕೂತಲ್ಲಿ ಆಳ್ವ, ಸರ್ವಜ್ಞ ॥

ನುಡಿಗಿಂತ ನಡೆ ಮೇಲು, ನಡೆಗಿಂತ ಇರುವು ಮೇಲು. 'Being is better than doing' ಆದುದರಿಂದ ಒಳ್ಳೆಯ ಬಾಳನ್ನು ಬಾಳಿರಿ ; ಒಳ್ಳೆಯ