ಈ ಪುಟವನ್ನು ಪ್ರಕಟಿಸಲಾಗಿದೆ
3

(Intuition) ಬಲದಿಂದ ಆತನನ್ನು ಸಾಕ್ಷಾತ್ಕರಿಸಿಕೊಂಡರು. ಆತನ ಭವ್ಯರೂಪವನ್ನು ಕಂಡರು. ದಿವ್ಯ ಆನಂದವನ್ನು ಉಂಡರು. ಈ ರೀತಿ ಅವರು ತಮ್ಮನ್ನು ಉದ್ದರಿಸಿಕೊಂಡು, ತಮ್ಮ ಪರಿವಾರದವರನ್ನೂ ಉದ್ದರಿಸಿದರು. ಇವರೇ ಮಹಾತ್ಮರು, ಸಂತರು, ಶರಣರು, ದಾಸರು, ಪ್ರೇಷಿತರು, ಕಾರಣಿಕ ಪುರುಷರು. ಭಗವಂತನು ಆಯಾ ಸ್ಥಲ-ಕಾಲಗಳಿಗೆ ಅವಶ್ಯವಿರುವ ಇಂಥ ಪ್ರೇಷಿತರಿಂದಲೇ ಜನತೆಯಲ್ಲಿ ನವಜಾಗೃತಿಯನ್ನುಂಟು ಮಾಡಿರುವ. ಆಯಾ ಸಮಾಜದ, ರಾಷ್ಟ್ರದ, ಸಾಂಸ್ಕೃತಿಕ ನೆಲೆಯನ್ನು ಉನ್ನತ ಗೊಳಿಸಿರುವ. ಇಂಥ ಪ್ರೇಷಿತರಲ್ಲಿ ಬಸವಣ್ಣನವರು ಒಬ್ಬರು.

ಪರಿಸ್ಥಿತಿ:

"ಕಾರಣಪುರುಷನು ಆ ಕಾಲದ ನಿರ್ಮಿತಿಯು (A Hero is the product of the Age) ಎಂದು ಓರ್ವ ಹಿರಿಯರು ಉಸಿರಿರುವರು. ಆಯಾ ಕಾಲವು ಆಯಾ ಕಾರಣಪುರುಷನನ್ನು ಕರೆಯುವುದು. ಆತನ ನೆರವಿನಿಂದ ಅಂದಿನ ಕುಂದುಕೊರತೆಗಳನ್ನು ಕಳೆಯಲು ಯತ್ನಿಸುವದು. ಆದುದರಿಂದ ಬಸವಣ್ಣನವರು ಅವತರಿಸಿದ ದೇಶ-ಕಾಲ-ಪರಿಸ್ಥಿತಿಯ ಪರಿಚಯವು ಅವರ ಕಾರ್ಯದ ಸ್ವರೂಪವನ್ನು ಹಿರಿಮೆಯನ್ನೂ ಅರಿಯಲು ಚೆನ್ನಾಗಿ ನೆರವಾಗಬಲ್ಲದು. ಆದುದರಿಂದ ಅದನ್ನಿಲ್ಲಿ ಕಿರಿದರಲ್ಲಿ ಅರುಹಬಯಸುವೆ.

ಬಸವಣ್ಣನವರು ಅವತರಿಸಿದುದು ಹನ್ನೆರಡನೇ ಶತಮಾನದಲ್ಲಿ, ಕನ್ನಡ ನಾಡಿನಲ್ಲಿ. ಈ ಶತಮಾನವು ನಮ್ಮ ನಾಡಿನಲ್ಲಿ ಕ್ರಾಂತಿಮಯ ಕೋಲಾಹಲವನ್ನು ಎಬ್ಬಿಸಿದ ಕಾಲ. ಅಂದು ಕಲ್ಯಾಣಚಾಲುಕ್ಯರ ವೈಭವವು ಇಳಿಮುಖವಾಯಿತು. ಅವರ ಮಹಾಮಂಡಲೇಶ್ವರನಾದ ಕಳಚೂರ್ಯ ವಂಶದ ಬಿಜ್ಜಳನು, ರಾಜ್ಯಸೂತ್ರಗಳನ್ನೆಲ್ಲ ತಾನೇ ವಹಿಸಿಕೊಂಡು 'ನಿಜ- ಭುಜ- ಬಲ- ಚಕ್ರವರ್ತಿ'ಯಾದನು. ಧಾರ್ಮಿಕ ಪರಂಪರೆಗಳಲ್ಲಿ ಒಂದಾದ ಜೈನಮತವು ಹಿಂದಿನ ಉತ್ಕರ್ಷಕ್ಕೆ ಹೊರತಾಗಿ ಇದ್ದುದನ್ನು ಕಾಯ್ದುಕೊಳ್ಳುವದರಲ್ಲಿತ್ತು. ದೈವಭಕ್ತಿ