ಈ ಪುಟವನ್ನು ಪ್ರಕಟಿಸಲಾಗಿದೆ
7

೧) ವಿಶ್ವದ ಎಲ್ಲಾ ಧರ್ಮದರ್ಶನಗಳ ಅಧ್ಯಯನದಲ್ಲಿ ಸಮನ್ವಯ ಸಿದ್ಧಾಂತ ಪ್ರತಿಪಾದನೆ.

೨) ಧಾರ್ಮಿಕ- ದಾರ್ಶನಿಕಗಳನ್ನೊಳಗೊಂಡ ಗ್ರಂಥಗಳ ಪ್ರಕಟಣೆ.

೩) ವಿವಿಧ ಚಿಂತನೆಗಳ ಬಗೆಗೆ ಚರ್ಚೆ, ಸಮ್ಮೇಳನ, ಕಾರ್ಯಾಗಾರ ಹಾಗೂ ಉಪನ್ಯಾಸಗಳ ಆಯೋಜನೆ.

ಈ ಮೇಲಿನ ಎಲ್ಲಾ ಕಾರ್ಯಗಳನ್ನು ಅಧ್ಯಯನ ಪೀಠದ ಮಾದರಿಯಲ್ಲಿ ಕ್ರೋಢೀಕರಿಸಿ, ಸಾಧನೆ ಮತ್ತು ಶಿಕ್ಷಣಕ್ಕೆ ಅನುವು ಮಾಡಿ ಕೊಡುವುದು.

ಶ್ರೀ ಬಸವಣ್ಣನವರ ದಿವ್ಯ ಜೀವನದರ್ಶನವೇ ಸಮನ್ವಯ ಸಿದ್ಧಾಂತದ ಸಾರ, ಅಂಥ ಮಹನೀಯರ ದಿವ್ಯ ಜೀವನದರ್ಶನದ ಮರು ಪ್ರಕಟಣೆ ನಮ್ಮ ಭಾಗ್ಯ ಎಂದು ಭಾವಿಸಿದ್ದೇವೆ.

ಈ ಪ್ರಕಟಣೆಗೆ ಅನುಮತಿಯನ್ನು ನೀಡಿದ ಲೋಕಶಿಕ್ಷಣ ಟ್ರಸ್ಟನ ಆಡಳಿತ ವರ್ಗಕ್ಕೆ ಹಾಗೂ ಶ್ರೀ ಎ. ಸಿ. ಗೋಪಾಲರವರಿಗೆ ನಾವು ಕೃತಜ್ಞರಾಗಿದ್ದೇವೆ.

ಅಂದವಾಗಿ ಮುದ್ರಿಸಿಕೊಟ್ಟ ಸ್ವಸ್ತಿಕ್ ಪ್ರಿಂಟರ್ ಅವರಿಗೆ ಸಂಸ್ಥೆ ಅಭಾರಿಯಾಗಿದೆ.

ಇಂತು,

ಸಜ್ಜನವಿಧೇಯ
ಎಂ. ಬಿ. ಝಿರಲಿ
(ವಕೀಲರು)
ಗೌ. ಕಾರ್ಯದರ್ಶಿ
ACPR, ಹಿಂದವಾಡಿ, ಬೆಳಗಾವಿ