ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೩೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮದಾಸಸ್ವಾಮಿಗಳ ಚರಿತ್ರ. ಭೋ೪ಾಂವುನನಿಸ್ಸಿಮಭಕ್ತಿ-ಸಮರ್ಥತ ಶಿಷ್ಯಸಮುದಯದೊಳಗೆ ಔರಂಗಾಬದ ಕಡೆಯ ಒಬ್ಬ ಶಿಷ್ಯನಿದ್ದನು. ಅವನು ಬಹಳ ಭೋಳೆಭಾವದವ ನಿದ್ದನು, ಆದ್ದರಿಂದ ಸಮರ್ಥರು ಯಖವಾದರೂ ತಾಂಬೂಲವನ್ನು ಕುಟ್ಟಿಸಿ ಬೇಡುವದಿದ್ದರೆ ಭೂಳಾರಾಮನಿಗೇ ಬೇಡುತ್ತಿದ್ದರು. ಒಂದುಸಾರೆ ಸಮರ್ಥ ರಿಗೆ ಕೆಮ್ಮಿನ ಉಪದ್ರವ ಹೆಚ್ಚಾಗಿತ್ತು. ಗೋತ್ರ ಎಂದು ಕಮ್ಮಿದ ಕೂಡಲೆ ಕಫದ ಲೊ ದಡಿಯು ಹೇಳಕೂಡದಷ್ಟು ಬೀಳುತ್ತಿತ್ತು, ಸಮರ್ಥರ ಹತ್ಯರ ಅಟ್ಟದ ಉಗುಳು ವ ಪಾತ್ರೆಯು ಲೋದಡಿಯಿಂದಲೂ ಉಗುಳಿನಿಂದಲೂ ತುಂಬಿಹೋಯಿತು, ಆದ್ದ ರಿಂದ ಸಮರ್ಥ ರು ( ಆ ಪಾತ್ರೆಯೊಳಗಿನ ಉಗುಳು ಲೆದಡೆಗಳನ್ನು ಜನರಿಲ್ಲದಲ್ಲಿ ಚಲ್ಲಿ ಪಾತ್ರೆಯನ್ನು ತೊಳೆದುಕೊಂಡು ಬಾ” ಎಂದು ಅವನಿಗೆ ಹೇಳಿದರು, ಆಗ ಆವ ನು ಆ ಪಾತ್ರೆಯನ್ನು ತೆಗೆದುಕೊಂಡು ಹೋಗಿ ಕಿಲ್ಲೆ ಯ ತುಂಬೆಲ್ಲ ಅಡ್ಡಾಡಿದ ಗ್ಯೂ ಜನರು ಓಡಾಡುವದನ್ನು ಕಂಡು ಆ ಉಗುಳನ್ನು ತನ್ನ ಬಾಯಿಯಲ್ಲಿಯೇ ನುಂಗಿ ಪಾತ್ರೆಯನ್ನು ಸ್ವಚ್ಛ ಮಾಡಿ ಸವರ್ಧರ ಮುಂದೆ ತಂದಿಟ್ಟನು. ಸಮರ್ಥ ರು ಎಲ್ಲಿ ಚಲ್ಲಿದೆ ಎಂದು ವಿಚಾರಿಸಲು ಅವನು ಸಂಭವಿಸಿದ ನಿಜವೃತ್ತಾಂತವನ್ನು ಅವರಿಗೆ ತಿಳಿಸಿದನು, ಅದನ್ನು ಕೇಳಿ ಅವರು ಅವನ ನಿಸ್ಸಿನ ಭಕ್ತಿಯ ಬಗ್ಗೆ ಬ ಹಳ ಕೌತುಕಪಟ್ಟರು, ಸಮರ್ಥರು ದಿನಾಲು ಭೋಜನೋತ್ತರ ತಾವು ಮೆಲ್ಲುವ ತಾಂಬೂಲವನ್ನು ಭೋಳಾರಾಮನ ಕೈಯಿಂದಲೇ ಕುಟ್ಟಿಸುವದನ್ನು ಕಂಡು ಉಳಿದ ಶಿಷ್ಯರು ಅವನ ಕೂಡ ಮಚ್ಛರ ಮಾಡಹತ್ತಿದರು, ಆದ್ದರಿಂದ ಒಂದು ಸಾರೆ ಅವರು ಭೋಳಿರಾಮನು ತಾಂಬೂಲು ಕುಟ್ಟುವ ಒರಳನ್ನು ಎತ್ತಿ ಎರಡನೇ ಕಡೆಗೆ ತಗದಿ ಟೈರು, ಅವನು ದಿನಂಪ್ರತಿಯಂತೆ ಆ ಒರಳನ್ನು ಎಷ್ಟು ಹುಡುಕಿದರೂ ಅದು ಸಿಗಲಿಲ್ಲ. ಆದ್ದರಿಂದ ಅವನು ತನ್ನ ಹಲ್ಲಿನಿಂದಲೇ ತಾಂಬೂಲವನ್ನು ಜಜ್ಜಿ ಜೀರ್ಣ ಮಾಡಿ ಅದನ್ನು ಸಮರ್ಥರಿಗೆ ಕೊಟ್ಟನು. ಆಗ ಸಮರ್ಥರು- ಈ ವೊತ್ತು ಕು ಟಿ ತಂದ ತಾಂಬೂಲವು ಬಹಳ ರುಚಿಕರವಾಗಿದೆ ಎಂದು ನುಡಿದರು, ಅದಕ್ಕೆ ಭೋಳುರಾಮನು-K ಈ ವೊತ್ತು ತಾಂಬೂಲವನ್ನು ಕುಟ್ಟತಂದ ಒರಳು (ಬಲಬ ತು) ಹೊಸಮಾದರಿಯುಳ್ಳ ದಿರುತ್ತದೆ, ಎಂದು ಹೇಳಿದನು. ಅಗ ಸಮರ್ಥರು ಭೋಳುರಾಮನಿಗೆ « ದಿನಾಲು ಈವೊತ್ತಿನ ಖಲಬತ್ತಿನಲ್ಲಿಯೇ ಕುಟ್ಟಿ ಕೊಂಡು ಬರುತ್ತಬಾ” ಎಂದು ಹೇಳಿದರು, ಅವನು ಮುಂದೆ ಅದರಂತೆಯೇ ಮಾಡಹತ್ತಿ ದನು. ಇದನ್ನು ಉಳಿದ ಶಿಷ್ಯರು ನೋಡಿ-« ಈ ಭ್ರಷ್ಟನು ತನ್ನ ಬಾಯಿಯಲ್ಲಿ ತಿಂದ ಎಂಜಲವನ್ನು ಸ್ವಾಮಿಗಳಿಗೆ ಕೊಡುತ್ತಾನೆ, ಇದನ್ನು ಸ್ವಾಮಿಗಳಿಗೆ ಹಾ ಗೆ ತಿಳಿಸಬೇಕು? ” ಎಂದು ತಮ್ಮ ತಮ್ಮೊಳಗೆ ವಿಚಾರವಾಡತೊಡಗಿದರು, ಒಬ್ಬ ರಿಗೂ ಸಮರ್ಥರ ಮುಂದೆ ಬಂದು ಇದನ್ನು ಹೇಳುವ ಧೈರ್ಯವಾಗಲಿಲ್ಲ. ಆದರೆ ಅವರೆಲ್ಲರು ಇದನ್ನು ಶಿವಜಿಮಹಾರಾಜರಿಗೆ ತಿಳಿಸಿದರು, ಆಗ ಮಹಾರಾಜರು