ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು 'ಸಂಸಾರ-ಸುಖ'ದ ತೃಪ್ತಿ ಮುಕ್ತಿಯ ಸ್ವರೂಪಾನಂದ ದೊರೆಯುವವರೆಗೆ ಮಾತ್ರ!! ನಾವೂ ಈಗ ಅಶ್ವತ್ಥಾಮನ 'ಹಾಲು ಕುಡಿಯುತ್ತಿರುವೆವು. ಸಂಸಾರದ ಸುಖವನ್ನೇ ಸುಖವೆಂದು ಭ್ರಮಿಸಿರುವೆವು. ಮುಕ್ಕಿ ಸುಖವೆಂಬುದು ನಿಜವಾದ ಹಾಲು ಎಂದು ಅರಿವಾದಾಗ ಈ ನಶ್ವರ ಸುಖದತ್ತ ತಿರುಗಿಯೂ ನೋಡದ ವೈರಾಗ್ಯ ತಾನೇ ಮೂಡುತ್ತದೆ. ಯಲ್ಲಡಿಯ ನೆಳಲಂತೆ ಭವಸುಖ ತಲ್ಲಣವಗೊಳಿಸುವುದು ನಿಶ್ಚಯ ವಲ್ಲ: ಸಾಲವ ಮಾಡಿ ಸಕ್ಕರೆ ಮೆದ್ದ ತೆರನಂತೆ | ಕ್ಷುಲ್ಲಕರ ಕೊಂಡಾಡದಲೆ ಶ್ರೀವಲ್ಲಭನ ಸದ್ಗುಣಂಗಳ ಬಲ್ಲವರ ಕೂಡಾಡಿ ಸಂಪಾದಿಸುವ ಪರಮ ಪದವ ||