ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು ವೇದವ್ಯಾಸರು ಮಧ್ಯೆ ಪ್ರವೇಶಿಸಿದರು. ತಮ್ಮ ತಮ್ಮ ಅಸ್ತವನ್ನು ಹಿಂದೆಗೆದುಕೊಳ್ಳುವಂತೆ ಅರ್ಜುನ, ಅಶ್ವತ್ಥಾಮರಿಗೆ ಆದೇಶಿಸಿದರು. ಅರ್ಜುನನಿಗೆ ಅವರ ಆದೇಶದಂತೆ ತಾನು ಪ್ರಯೋಗಿಸಿದ ಬ್ರಹ್ಮಾಸ್ತ ಹಿಂದೆ ಪಡೆಯಲು ಸಾಧ್ಯವಾಯಿತು. ಆದರೆ, ಮಾನಸಿಕವಾಗಿ ಭ್ರಷ್ಟರಾಗಿ ಬ್ರಹ್ಮಚಯ್ಯ ಕಳೆದುಕೊಂಡ ಅಶ್ವತ್ಥಾಮರಿಂದ 'ಬ್ರಹ್ಮಾಸ್ತ್ರದ ಉಪಸಂಹಾರ ಸಾಧ್ಯವಾಗಲಿಲ್ಲ. ಕೊನೆಗೆ ಅರ್ಜುನನೇ ತನ್ನ ಬ್ರಹ್ಮಚರ್ಯದ ಬಲದಿಂದ ಅಶ್ವತ್ಥಾಮರ ಬ್ರಹ್ಮಾಸ್ತ್ರವನ್ನು ಉಪಸಂಹರಿಸಿದನು.

      • ಮದುವೆಯಾಗದೇ ಬ್ರಹ್ಮಚಾರಿಯಾಗಿದ್ದ ಅಶ್ವತ್ಥಾಮಾಚಾರ ಒಂದು ಕ್ಷಣದ ಅಚಾತುರ್ಯದಿಂದ ಬ್ರಹ್ಮಚರ್ಯ ಕಳೆದುಕೊಂಡಿದ್ದರು. ಮದುವೆಯಾಗಿ ನಾಲ್ಕು ಮಡದಿಯರ ಗಂಡನಾಗಿದ್ದರೂ ಅರ್ಜುನ ತನ್ನ ಪರನಾರೀ ಸೋದರಭಾವದಿಂದಾಗಿ ಬ್ರಹ್ಮಚಾರಿ'ಯೇ ಆಗಿದ್ದ!

ನಮ್ಮದೂ 'ಅಶ್ವತ್ಥಾಮ' ರ ಸ್ಥಿತಿ. ನಮ್ಮ ಇಂದ್ರಿಯಗಳನ್ನು ವಿಷಯ ಪದಾರ್ಥಗಳೆಡೆಗೆ ಹರಿಸುವೆವು. ಮತ್ತೆ ಹಿಂದೆ ಪಡೆಯಲು ಮಾತ್ರ ನಮ್ಮಿಂದಾಗದು!! ನಮ್ಮದೇ ಇಂದ್ರಿಯಗಳ ಮೇಲೆ ನಮಗೆ ಹತೋಟಿಯಿಲ್ಲ ನಾವು ಮನೋಬಲ ಕಳೆದುಕೊಂಡ ನಪುಂಸಕ'ರಾಗಿದ್ದೇವೆ. 'ಬ್ರಹ್ಮಚರ್ಯ' ಕಳೆದುಕೊಂಡಿದ್ದೇವೆ. ಮಹಾಭಾರತ