ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು _23 ಪಕ್ಷದಲ್ಲಿ ನಿಂತ. ಯುದ್ಧ ಜರುಗಿತು. ಫಲಿತಾಂಶ ನಿಮಗೆಲ್ಲ ಗೊತ್ತೇ ಇದೆ. ಭಗವಂತನಿಂದ ಸಮಸ್ತ ಸೇನಾಬಲ ಪಡೆದ ದುರ್ಯೊಧನ ಸೋಲನ್ನುಂಡ, ನೆಲಕಚ್ಚಿದ. ಸಾಕ್ಷಾತ್ ಭಗವಂತನನ್ನೇ ಪಡೆದ ಪಾಂಡವರು ಜಯಶೀಲರಾದರು. ಭಗವಂತ ಶಾಶ್ವತ; ಭಗವಂತನಿಂದ ಪಡೆದದ್ದಲ್ಲ!! ಆದುದರಿಂದ ನಾವು ಭಗವಂತನನ್ನು ಬಯಸಿ ಪಡೆಯಬೇಕೇ ಹೊರತು, ಭಗವಂತನಿಂದ ಬಯಸಬಾರದು.