ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು ಆ ದಿನ ರಾತ್ರಿ ಜಮೀನುದಾರರ ಕನಸಿನಲ್ಲಿ ದೇವರು ಕಾಣಿಸಿಕೊಂಡರು. ಕಳುಹಿಸಿದ ಬಾಳೆಯ ಗೊನೆಯಲ್ಲಿ ಎರಡು ಬಾಳೆಹಣ್ಣುಗಳು ಮಾತ್ರ ತನಗೆ ತಲುಪಿರುವುದಾಗಿ ದೇವರು ಹೇಳಿ ಮಾಯವಾದಾಗ ಜಮೀನ್ದಾರರಿಗೆ ಬಹಳ ಅಚ್ಚರಿ! ಮರುದಿನ ಅರ್ಚಕರನ್ನು ಕರೆದು ವಿಚಾರಿಸಿದರು. ನಡೆದ ಘಟನೆಯನೆಲ್ಲ ಕೇಳಿದಾಗಲೇ ತಿಳಿದದ್ದು - ಆ ಹಸಿದ ಪುಟ್ಟ ಬಾಲಕ ತಿಂದ ಎರಡು ಹಣ್ಣುಗಳು ಮಾತ್ರ ದೇವರಿಗೆ ನೇರ ತಲುಪಿದ್ದವು !! ಹಸಿದವರ ಹೊಟ್ಟೆಯಲ್ಲಿ ದೇವರಿರುವನಲ್ಲವೆ ! ಆದುದರಿಂದ, ನಮ್ಮ ದಾನ ಅವಶ್ಯಕತೆ ಇರುವವರಿಗಾಗಿ ಮೀಸಲಿರಬೇಕು.

ದಾನಂ ಧ್ರುವಂ ಫಲತಿ ಪಾತ್ರಗುಣಾನುಕೂಲ್ಯಾತ್ || ದಾನ ಪಡೆವ ವ್ಯಕ್ತಿಯ ಯೋಗ್ಯತೆಗನುಗುಣವಾಗಿ, ನಾವು ನೀಡಿದ ದಾನವು ಹುಸಿಯಾಗದೆ ಫಲಿಸುತ್ತದೆ.