ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

60 ಸಂದೇಶದ ಕಥೆಗಳು ಆಗ ವೇದದ ಉಪದೇಶವನ್ನು ಗುರುಗಳಿಂದ ಪಡೆಯಬೇಕು. “ಸ ಆಾತತ್ವಮಸಿ...'. ನಾವೂ ಆ ಭಗವಂತನಂತೆ ಜ್ಞಾನಾನಂದಮಯ ಎನ್ನುವುದನ್ನು ಮನಗಾಣಬೇಕು. ನಮ್ಮ ಮಮಕಾರ ತೊರೆದು ಭಗವಂತನ ಬಳಿ ಸಾಗಬೇಕು. ಆದರೆ ನಾವು ಭಗವಂತನಲ್ಲ ; ಭಗವಂತನಂತೆ ಸ್ವತಂತ್ರರೂ ಅಲ್ಲ; ಭಗವಂತನ ಅಧೀನರು ಎಂಬುದನ್ನು ತಿಳಿಯಬೇಕು. ನಾವು 'ಕುರಿ' ಗಳಲ್ಲ; 'ಹುಲಿ' ಗಳು !