ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೬೭

ಕಾಮಾಂಧನಿಗೂ ಯುಕ್ತಾಯುಕ್ತ ವಿಚಾರವೇ ಇಲ್ಲದೆ, ವಿಷಯಾ ತುರವೆಂಬ ಕ್ಷುದ್ಬಾಧೆಯೊಂದೇ ಮುಂದಾಗಿ, ಆವುದನ್ನಾದರೂ ಮಾಡಿಸಿಬಿಡುವುದು. ಇಂತಹ ಕಾಮಾತುರರಾದವರಿಂದ ಈ ಜಗತ್ತಿನಲ್ಲಿ ಎಂತೆಂತಹ ಕಾರ್ಯಗಳು ನಡೆಯುತ್ತಿರುವುದೆಂಬುದನ್ನು ಇಲ್ಲಿ ಹೇಗೂ ಹೇಳಿ ಮುಗಿಯುವಂತಿಲ್ಲ. ಕಾಮಕ್ಕೆ ಅಧೀನರಾಗದೆ, ಶತ್ರುಸ್ವರೂಪವಾದ ಅರಿಷಡ್ವರ್ಗವನ್ನು ಜಯಿಸಿರತಕ್ಕವರಾರೋ, ಅವರೇ ಸಿದ್ಧರು, ಅವರೇ ಪರಮಪುರುಷರು. ಅಂತಹ ಧನ್ಯಾತ್ಮರಿಗೆ ನಮ್ಮ ಸಹಸ್ರ ವಂದನೆಗಳು.