ಈ ಪುಟವನ್ನು ಪ್ರಕಟಿಸಲಾಗಿದೆ

ಅದೇನಿದ್ದರೂ ವಿದ್ಯಾಭ್ಯಾಸದ ಈ ಸುಧಾರಣೆ ಹೊಸ ಪ್ರಯೋಗವೆನ್ನುವುದರಲ್ಲಿ ಸಂದೇಹವಿರಲಿಲ್ಲ. ವಿದ್ಯಾಭ್ಯಾಸ ಪದ್ಧತಿಯಲ್ಲಿ ಬದಲಾವಣೆಯಾಗಲೇ ಬೇಕು ಎಂಬ ವಿಷಯದಲ್ಲೂ ಭಿನಾಭಿಪಾಯವಿರಲಿಲ್ಲ, ಈಗ ಸುಧಾರಣೆಗಳ ಪ್ರಸ್ತಾಪ ಬಂದು ಜಯದೇವನಿಗೆ ಸಂತೋಷವಾಯಿತು. ಈ ಮಹಾಪ್ರಯೋಗದಲ್ಲಿ ತಾನೂ ಭಾಗಿಯಾಗುವೆನೆಂದು ಹೆಮ್ಮೆ ಎನಿಸಿತು.

ಮುಂದೆ ಊರಲ್ಲಿ ಸಿದ್ಧವಾಗಬೇಕಾದ ಖಾಸಗಿ ಹೈಸ್ಕೂಲು, ಸ್ವಾವಲಂಬಿಗಳನ್ನು ಸಿದ್ಧಗೊಳಿಸುವ ಹೊಸ ಮಾದರಿಯ ದ್ವಿತೀಯ ಹಂತದ ಶಾಲೆಯಾಗಿ ತನ್ನ ನೇತೃತ್ವದಲ್ಲಿ ನಡೆಯುವ ಚಿತ್ರವನ್ನು ನಂಜುಂಡಯ್ಯನವರು ಕಲ್ಪಿಸಿಕೊಂಡರು.

ವೆಂಕಟರಾಯರು ಮಾತ್ರ ಅಂದರು :

“ಅಂತೂ ಈ ಪ್ರಯೋಗಗಳೆಲ್ಲ ಜಾರಿಗೆ ಬರೋ ಹೊತ್ತಿಗೆ ನನಗೆ ನಿವೃತ್ತಿಯಾಗಿರುತ್ತೆ!”

ಸುಧಾರಣೆಯ ಮೊದಲ ಹೆಜ್ಜೆಯಾಗಿ ಲೋವರ್ ಸೆಕೆಂಡರಿ ಪರೀಕ್ಷೆಯನ್ನೇ—ಮಾಧ್ಯಮಿಕ ಶಾಲೆಯ ಸಾರ್ವಜನಿಕ ಪರೀಕ್ಷೆಯನ್ನೇ– ಮುಂದಿನ ವರ್ಷದಿಂದ ತೆಗೆದು ಹಾಕುವ ನಿರ್ದೇಶ ಬಂತು.

ಹಾಗಿದ್ದರೆ ಆ ವರ್ಷದ್ದೇ ಕೊನೆಯ ಐದು ರೂಪಾಯಿಗಳ ಎಲ್.ಎಸ್. ಪರೀಕ್ಷೆ

ಇದರಿಂದ ಮಾತ್ರ ವೆಂಕಟರಾಯರಿಗೆ ಅಸಮಾಧಾನವಾಯಿತು. ದೂರದಲ್ಲಿ ಸೊಬಗಿನದಾಗಿ ಕಂಡಿದ್ದ ಸುಧಾರಣೆ ತೀರ ಸಮಿಾಪಕ್ಕೆ ಬಂದಾಗ ನಂಜುಂಡಯ್ಯನೂ ಅಳುಕಿದರು. ಇನ್ನು ಮುಂದೆ ಎಲ್.ಎಸ್. ಪರೀಕ್ಷೆಗೆ ಭೀತಿಯ ಸ್ವರೂಪವಿಲ್ಲ, ಕೋಚಿಂಗ್ ಕ್ಲಾಸುಗಳಿಗೂ ಹಿಂದಿನ ಮಹತ್ವ ವಿಲ್ಲ, ಉತ್ತರ ಪತ್ರಿಕೆಗಳ ಪರೀಕ್ಷಕರಾಗಿ ದೊರೆಯುತಿದ್ದ ಇನ್ನೂರು ರೂಪಾಯಿಗಳಷ್ಟರ ಸಂಭಾವನೆಯೂ ಇನ್ನಿಲ್ಲ.

“ಈ ಸುಧಾರಣೆಗಳ ಪರಿಣಾಮ ಏನಾಗುತ್ತೊ ನೋಡಬೇಕು” ಎಂದು ವೆಂಕಟರಾಯರೂ ನಂಜುಂಡಯ್ಯನವರೂ ಶಂಕೆ ವ್ಯಕ್ತ ಪಡಿಸಿದರು!

ಜಯದೇವನಿಗೆ ಆ ಏರ್ಪಾಟೂ ಸಾಗತಾರ್ಹವಾಗಿ ತೋರಿತು. ವರ್ಷವೆಲ್ಲ ಕಲಿತುದನ್ನು ಕೆಲವೇ ಗಂಟೆಗಳಲ್ಲಿ ಯಾಂತ್ರಿಕವಾಗಿ ಸಾರ್ವ