ಅಮೃತಧಾರೆ - ಏಳು ಶ್ರೀ ಸಾಮಾನ್ಯ

ಚಿತ್ರ: ಅಮೃತಧಾರೆ
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಮನೋಮೂರ್ತಿ
ಗಾಯನ: ರಾಮ್ ಪ್ರಸಾದ್, ನಂದಿತ


ಭೂಮಿಯೆ ಹಾಸಿಗೆ
ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ಧನಿಕನಿಗೆ |೨|

ಏಳು ಶ್ರೀ ಸಾಮಾನ್ಯ
ಏಳಯ್ಯ ಬೆಳಗಾಯಿತು

ಏಳು ನೀ ಸದ್‍ಗೃಹಿಣಿ
ಏಳಮ್ಮ ಬೆಳಗಾಯಿತು

ಹಾಲು, ಪೇಪರ್ ನವರು ನಿನ್ನ ದರುಶನಕೆ ಕಾದಿಹರು

ಸ್ಕೂಲು ವ್ಯಾನು ಬಂದು ನಿನ್ನ ಕಂದನಿಗೆ ಕಾಯ್ದಿಹುದು

ಬೆಳಗಿನಾಟಕೆಂದು! ನಿಂಗೆ ಥೇಟರ್ ತೆಗೆದಿಹುದು
ದಿನ ಭವಿಷ್ಯದಲ್ಲಿ ನಿನಗೆ ಧನಲಾಭ ಬರದಿಹುದು

ಏಳು ಶ್ರೀ ಸಾಮಾನ್ಯಾ
ಎದ್ದೇಳು!

ಭೂಮಿಯೆ ಹಾಸಿಗೆ
ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ದನಿಕನಿಗೆ

ಕನ್ನಡಾಂಬೆ ಸುಪ್ರಜಾ ನೀರೆ
ಸೂರ್ಯ ಬಂದಾಯ್ತು ಕಣ್ಣು ಬಿಡು

ಬೆಡ್ ಕಾಪಿ ಕುಡಿದಾಯ್ತೆ
ವಾಕಿಂಗು ಮುಗಿಸುಬಿಡು

ಉದ್ದುದ ಕ್ಯೂ ನಿಂತು ಲೈಟ್ ಬಿಲ್ಲು ಕಟ್ಟಿಬಿಡು

ಬಸ್ಸು .... ಅಮೂಲ್ಯ ವೋಟನ್ನು ಹಾಕಿಬಿಡು

ಭೂಮಿಯೆ ಹಾಸಿಗೆ
ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ದನಿಕನಿಗೆ |೨|


ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ