ಚಿತ್ರ: ಆ ದಿನಗಳು
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ಇಳಯರಾಜ
ಗಾಯನ: ಇಳಯರಾಜ, ನಂದಿತ


ಸಿಹಿ ಗಾಳಿ.. ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು.. ಬರಿ ಮಾತು
ಇನ್ಯಾಕೆ ಪ್ರೀತಿಯಲಿ |೨|

ನೋಟ ಒಂದೆ ಸಾಕು
ದಿನವು ಬೆರೆಯಲೆ ಬೇಕು
ಪ್ರೇಮ ಅಮೃತದ ಗೀತೆ ಬರೆಯೋಣ ಬಾ!

ಸಿಹಿ ಗಾಳಿ.. ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು.. ಬರಿ ಮಾತು
ಇನ್ಯಾಕೆ ಪ್ರೀತಿಯಲಿ

ಬಾನಾಡಿಗೊಂದು ಸವಿ ಮಾತು ಕಲೆಸುವ
ಆ ವೀಣೆಗೊಂದು ಎದೆರಾಗ ತಿಳಿಸುವ

ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ
ಅರಳುತಿರೊ ಹೂಗಳಿಗೆ ಒಲವ ಸುಧೆಯ ಕೊಡುವ

ಬಾಳಿನ ಅರ್ಥವೆ ಪ್ರೇಮವೆಂಬುದಲ್ಲವೆ
ಪ್ರೇಮವೆ ಇಲ್ಲದೆ ನಾನು, ನೀನು ಯಾಕೆ?

ಸಿಹಿ ಗಾಳಿ.. ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು.. ಬರಿ ಮಾತು
ಇನ್ಯಾಕೆ ಪ್ರೀತಿಯಲಿ

ನೋಟ ಒಂದೆ ಸಾಕು
ದಿನವು ಬೆರೆಯಲೆ ಬೇಕು
ಪ್ರೇಮ ಅಮೃತದ ಗೀತೆ ಬರೆಯೋಣ ಬಾ!

ಸಿಹಿ ಗಾಳಿ.. ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ


ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ