ಚಿತ್ರ: ಗಣೇಶ
ಸಾಹಿತ್ಯ: ರಾಮ್ ನಾರಾಯಣ್
ಸಂಗೀತ: ಮಣಿಕಂಠ ಕದ್ರಿ
ಗಾಯನ: ವಿ. ಪ್ರದೀಪ್ ಕುಮಾರ್


ಹಸಿರಿನ ತಂಪಲಿ
ಒಲವಿನ ಮರದಲಿ
ಎಲೆಗಳ ಮಡಿಲಲಿ
ಚಿಲಿ-ಪಿಲಿ ಗಿಳಿಗಳು ಗೂಡಲಿ

ಸೊನೆಯ ಸದ್ದಿನಲ್ಲಿ
ಪ್ರೀತಿಯ ಕಲರವ ಅಲ್ಲಿ
ತಮ್ಮದೆ ಲೋಕದಲ್ಲಿ
ಪ್ರೀತಿಸುತ ಇಹುದಿಲ್ಲಿ
ಚಂದದಿ ಬಾಳುತಿರುವಾಗ
ಆ ವಿಧಿ ಅಲ್ಲಿ ಬಂದಾಗ!

ಹಸಿರಿನ ತಂಪಲಿ
ಒಲವಿನ ಮರದಲಿ ..

ಗೂಡಿನಲ್ಲಿ ಇರಿಸಿ ಸಂಗಾತಿಯ
ಕಾಡಿಗಾಗಿ ಹೊರಟು ನಿಂತ ಇನಿಯ
ಸರಿ ಸಮಯವು ಕಾಯುತ
ಗರುಡ ಹಾರುತ ..
ಒಂಟಿ ಹಕ್ಕಿಯ
ದಿನವು ಕಾಡುತ ..
ಗಿಳಿ ಮನಸನು ಬಗೆ ಹರಡುತ
ಬಯಸುತಲಿದೆ..

ಹಸಿರಿನ ತಂಪಲಿ
ಒಲವಿನ ಮರದಲಿ ..

ಹಾರಿ ಬಂದ ಗರುಡನು ದಾನವ
ಜೋಡಿ ಹಕ್ಕಿ ತಿಳಿಕೊಂಡು ನಿಜವ
ತೊರೆದು ಗಿಳಿಗಳು ಗೂಡನು
ಕಾಡಿಗೊದವು ..
ಸೂರು ಹುಡುಕುತ ಚದುರಿ ಹೋದವು
ಅಲೆಯುತಲಿದೆ ಹರಸುತ ಮನ
ಗಿಳಿಗಳು ದಿನ ..

ಹಸಿರಿನ ತಂಪಲಿ
ಒಲವಿನ ಮರದಲಿ
ಎಲೆಗಳ ಮಡಿಲಲಿ
ಚಿಲಿ-ಪಿಲಿ ಗಿಳಿಗಳು ಗೂಡಲಿ

ಸೊನೆಯ ಸದ್ದಿನಲ್ಲಿ
ಪ್ರೀತಿಯ ಕಲರವ ಅಲ್ಲಿ
ಯಾವುದೆ ಗೋಜಿಗೂಗದೆ ಮನಸು
ಪ್ರೀತಿಸುತ ಇಹುದಿಲ್ಲಿ
ಚಂದದಿ ಬಾಳುತಿರುವಾಗ
ಆ ವಿಧಿ ಅಲ್ಲಿ ಬಂದಾಗ!


ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ