ಗುರಿ - ಕಲ್ಲಿನ ವೀಣೆಯ ಮೀಟಿದರೇನು

ಚಿತ್ರ: ಗುರಿ

ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಡಾ| ರಾಜ್‍ಕುಮಾರ್



ಕಲ್ಲಿನ ವೀಣೆಯ ಮೀಟಿದರೇನು
ನಾದವು ಹೊಮ್ಮುವುದೇ
ಮಲ್ಲಿಗೆ ಹೂಗಳು ಬಾಡಿದ ಮೇಲೆ

ಪರಿಮಳ ಚೆಲ್ಲುವುದೇ
ಹೇಳೂ.. ಪರಿಮಳ ಚೆಲ್ಲುವುದೇ

ಕಲ್ಲಿನ ವೀಣೆಯ ಮೀಟಿದರೇನು
ನಾದವು ಹೊಮ್ಮುವುದೇ

ಎಲೆ ಎಲೆಯಲ್ಲಾ ಹೂವುಗಳಾಗಿ

ಹೂವುಗಳೆಲ್ಲಾ ಬಾಣಗಳಾಗಿ
ನನ್ನೆದೆಯಾ ಸೋಕಲಿ

ಆ ಮನ್ಮಥನೇ ನನ್ನೆದುರಾಗಿ
ಮೋಹನರಾಗದೀ ನನ್ನನು ಕೂಗಿ
ಛಲದಲಿ ಹೋರಾಡಲಿ

ಎಂದಿಗು ಅವನು ಗೆಲ್ಲುವುದಿಲ್ಲಾ
ಸೋಲದೆ ಗತಿಯಿಲ್ಲಾ...

||ಕಲ್ಲಿನ ವೀಣೆಯ||
ಕಲ್ಲಿನ ವೀಣೆಯ ಮೀಟಿದರೇನು
ನಾದವೂ ಹೊಮ್ಮುವುದೇ


ಕಾಣುವ ಅಂದಕೇ ನಾ ಕುರುಡಾಗಿ
ಪ್ರೇಮದ ಹಾಡಿಗೇ ನಾ ಕಿವುಡಾಗಿ
ನೆಮ್ಮದೀ... ದೂರಾಗಿದೇ..

ರೋಷದ ಬೆಂಕಿ, ಒಡಲನು ನುಂಗಿ
ಶಾಂತಿಯು ನನ್ನಾ, ಎದೆಯಲಿ ಇಂಗಿ

ಆಸೆಯೂ ಮಣ್ಣಾಗಿದೇ..
ಗಾಳಿಯ ಹಿಡಿವ ಹಂಬಲವೇಕೆ
ಚಪಲವು ನಿನಗೇಕೇ..

||ಕಲ್ಲಿನ ವೀಣೆಯ||




ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ