ಚಿತ್ರ: ಅನುರಾಗ ಅರಳಿತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ|ರಾಜ್ ಕುಮಾರ್
ರಾಗ:






ಶ್ರೀಕಂಠ ವಿಷಕಂಠ, ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನ್ನು ಕುಡಿದಾ ನಂಜುಂಡೇಶ್ವರನೇ,
ಲೋಕವನುಳಿಸಲು ವಿಷವನ್ನು ಕುಡಿದಾ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವಾ ಕರುಣಾ ಸಾಗರನೇ .
ಗತಿ ನೀನೆಂದರೆ ಓಡುತ ಬರುವಾ ಕರುಣಾ ಸಾಗರನೇ .
||ಶ್ರೀಕಂಠ ವಿಷಕಂಠ, ಶ್ರೀಕಂಠ .ವಿಷಕಂಠ||


ಹರಿಯುವ ನದಿಯಲಿ ಕಲರವ ನಾದ ಕೂಡ ಶಿವ ಶಿವ ಎನ್ನುತ್ತಿದೆ
ಅರಳಿದ ಸುಮದಲ್ಲಿ ನಲಿಯುವ ಭ್ರಮರವು ಶಿವನಾಮ ಹಾಡುತ್ತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ್ತಾ ನಿನ್ನನೇ ಸ್ಮರಿಸುತ್ತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ್ತಾ ನಿನ್ನನೇ ಸ್ಮರಿಸುತ್ತಿದೆ
||ಶ್ರೀಕಂಠ ವಿಷಕಂಠ, ಶ್ರೀಕಂಠ .ವಿಷಕಂಠ||


ಆ ಆ ಆ


ಸಾವಿರ ಜನುಮವೇ ಬಂದರೂ, ಹೀಗೆ ನಿನ್ನ ಸನ್ನಿಧಿಯಲ್ಲಿ ಇರಿಸು
ಉಸಿರಿನ ಉಸಿರಲು ತಂದೆಯೇ, ಎಂದು ನಿನ್ನ ನಾಮವನ್ನು ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನಡೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನಡೆಸು


ಶ್ರೀಕಂಠ ವಿಷಕಂಠ, ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನ್ನು ಕುಡಿದಾ ನಂಜುಂಡೇಶ್ವರನೇ,
ಲೋಕವನುಳಿಸಲು ವಿಷವನ್ನು ಕುಡಿದಾ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವಾ ಕರುಣಾ ಸಾಗರನೇ .
ಗತಿ ನೀನೆಂದರೆ ಓಡುತ ಬರುವಾ ಕರುಣಾ ಸಾಗರನೇ .
||ಶ್ರೀಕಂಠ ವಿಷಕಂಠ, ಶ್ರೀಕಂಠ .ವಿಷಕಂಠ||


ಶ್ರೀಕಂಠಾs ವಿಷಕಂಠಾs, ಅ ಶ್ರೀಕಂಠಾs ವಿಷಕಂಠಾs

ಶ್ರೀಕಂಠಾs ವಿಷಕಂಠಾs, ಆ ಶ್ರೀಕಂಠಾs ವಿಷಕಂಠಾs


ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ