ನಳಚರಿತ್ರೆ:ಒಂಭತ್ತನೆಯ ಸಂಧಿ

<ನಳಚರಿತ್ರೆ

ನಳಚರಿತ್ರೆ:ಒಂಭತ್ತನೆಯ ಸಂಧಿ (ಸಂಗ್ರಹ) ಸಂಪಾದಿಸಿ

ಸೂಚನೆ

ಕದನದಲಿ ಪುಷ್ಕರನ ಬಲವನು
ಸದೆದು ಜೂಜಿಂ ಗೆಲಿದು ರಾಜ್ಯವ
ಮುದದಿ ಪಾಲಿಸುತಿರ್ದನಾ ಸತಿಸಹಿತ ನಳನೃಪತಿ


ಕಲಿಪುರುಷನಿಂದಾದುದುಪಹತಿ
ಲಲನೆ ಪುತ್ರರನಗಲಿ ಕಷ್ಟವ
ಬಳಸಿದೆಯಲಾ ನೊಂದು ಸತ್ಯವ ಬಿಡದೆ ಸಂಚರಿಸಿ
ಸುಲಭನಾದೆ ಕುಲಾಂಗನೆಯ ವ್ರತ
ಫಲದ ಪುಣ್ಯೋದಯದಿ ನಿಜಸಿರಿ
ಫಲಿಸಿತಿನ್ನೀ ಲೋಕದಲಿ ನಿನಗಾರು ಸರಿಯೆಂದ ||೮||

ಹರಿಯ ನೆಲೆಗೆಡಿಸಿದನು ಪರಮೇ
ಶ್ವರನ ಭಿಕ್ಷವನೆತ್ತಿಸಿದ ಸರ
ಸಿರುಹಭವ ತಾ ಶಿರವ ಪೋಗಾಡಿದನು ಪೂರ್ವದಲಿ
ಕರುಣಹೀನನು ನಿನ್ನ ಸೋಂಕಲು
ತೆರನ ಕಾಣದೆ ಹಲವು ದಿನ ಕಾ
ತರಿಸಿ ಛಲದಲಿ ತೊಡಚಿಬಿಟ್ಟನು ಮನದ ಭೀತಿಯಲಿ ||೯||

ಎಲ್ಲ ನೃಪರಂತಲ್ಲ ಲಕ್ಷ್ಮೀ
ವಲ್ಲಭನ ಪ್ರತಿಬಿಂಬ ನಿನ್ನಲಿ
ನಿಲ್ಲಬಲ್ಲನೆ ಕಲಿಪುರುಷನತಿ ಬೇಗ ತೆರಳಿದನು
ಸಲ್ಲಲಿತ ಸಾಮ್ರಾಜ್ಯಪದವಿಂ
ದೆಲ್ಲ ನಿನಗಹುದೆಂದು ಧರಣೀ
ವಲ್ಸಲಭನ ಸತ್ಕರಿಸಿ ಕೊಂಡಾಡಿದನು ಮೈತ್ರೇಯ ||೧೦||

ಅರಸ ಕೇಳು ವಿದರ್ಭಪತಿ ಮುನಿ
ವರರನುಪಚರಿಸಿದನು ಧರಣೀ
ಸುರರಿಗಿತ್ತನು ಗೋಹಿರಣ್ಯ ಸುವಸ್ತುದಾನವನು
ಕರೆಸಿ ಕೊಟ್ಟನು ನೃಪತಿಗಖಿಲಾ
ಭರಣಗಳ ಕರಿ ತುರಗ ರಥವನು
ಪುರಜನರ ಸಂತೈಸಿ ಕಳುಹಿದನಖಿಳಬಾಂಧವರ ||೧೩||

ದಂಡು ನಡೆಯಲಿ ನಿಷಧಪುರಿಗಾ
ಭಂಡ ನೃಪ ಪುಷ್ಕರನ ಮಾತೇ
ನಂಡಲೆದು ಫಲವಿಲ್ಲ ಸಾಕಿನ್ನೇಳಿಯೆಂದಿನುತ
ಮಂಡಲಾಧಿಪನೆನಲು ಭೂಪರ
ತಂಡವೆದ್ದುದು ಕೂಡೆ ಭಟರು
ದ್ದಂಡವೆದ್ದುದು ಕೂಡೆ ಭಟರು
ದ್ದಂಡ ಕೈದುವ ಕೊಂಡು ನಡೆದರು ನಳನ ಸನ್ನೆಯಲಿ ||೧೬||

ಹೊಳೆವ ಸಿಂಧದ ಸಾಲ ಝಲ್ಲರಿ
ಗಳ ಪತಾಕದ ಛತ್ರ ಚಮರಾ
ವಳಿಗಳಿಂದ ಧಾತುಗುಂದಿದಭ್ರತಳ ಮುಸುಕಿ
ಉಲಿವ ಮಂಗಳಪಾಠಕರ ಕಳ
ಕಳಿಕೆ ಮಿಗೆ ಹೆಬ್ಬಲ ಛಡಾಳಿಸೆ
ನೆಲ ಬಿರಿಯಲೈತಂದು ಬಿಟ್ಟುದು ನಿಷಧನಗರಿಯಲಿ ||೨೦||

ಮುರಿದ ಬಲ ಸಂವರಿಸಿಕೊಂಡುದು
ಮೊರೆವ ಕಹಳಾರವದ ಸನ್ನೆಯೊ
ಳುರುಬಿತಾ ಬಲದೊಳಗೆ ಬೆರಸಿತು ನಳನ ಪರಿವಾ ರ
ಅರಸನಾ ಸಮಯದಲಿ ಹೂಡಿದ
ಸರಳ ಕೆನ್ನೆಗೆ ಸೇದಿ ಬಿಡೆ ಕ
ತ್ತರಿಸಿ ಬಿಸುಟುದು ರಿಪುನೃಪರ ಶಿರಗಳನು ಖಂಡಿಸುತ ||೨೯||

ಆರು ಸಾಸಿರ ತೇರುಗಳು ಹದಿ
ನಾರುಸಾಸಿರ ಕರಿಗಳಿಪ್ಪ
ತ್ತಾರುಸಾವಿರ ತುರಗ ಕಾಲಾಳೊಂದು ಲಕ್ಷದಲಿ
ಸೇರಿತಂತಕಪುರಿಗೆ ಸರಳಿನ
ಸಾರದಲಿ ರಿಪುಸೇನೆ ಮುರಿದುದು
ಆರು ಬಲ್ಲರು ಮಿಕ್ಕ ಸೇನೆಯನರಸ ಕೇಳೆಂದ ||೩೩||

ಅರಿಭಯಂಕರ ನೈಷಧನ ಸಂ
ಗರದಿ ಗೆಲುವವರಾರು ದೇವಾ
ಸುರರು ನಿಲಲರಿದರಸ ಮಿಕ್ಕಿನ ನರರ ಪಾಡೇನು
ಮರುಳುತನ ಬೇಡಿನ್ನು ನೃಪನನು
ಕರೆಸಿ ಸಂಧಿಯ ಮಾಡಿ ಜೂಜಿನ
ಮರುವಲಗೆಯಲಿ ಗೆಲುವುದುಚಿತವೆಂದನಾ ಮಂತ್ರಿ ||೩೮||

ಎಲವೋ ಕೇಳಿನ್ನಾದುದಾಗಲಿ
ಕಲಹಕಂಜುವೆ ನೀನು ಜೂಜಿನ
ಬಳಕೆಯಲಿ ಬಲ್ಲಿದನು ನಮ್ಮನು ಕರೆದೆ ತಪ್ಪೇನು
ಕಲಹವಾಗಲಿ ಜೂಜದಾಗಲಿ
ಗೆಲುವೆ ನಿನ್ನನು ಕುಟಿಲ ಹೃದಯದ
ನೆಲೆಯ ಬಲ್ಲೆನು ನಿನಗೆ ಮನವೊಲಿದುದನು ಮಾಡೆಂದ ||೪೧||

ಹೂಡಿದರು ಸಾರಿಗಳ ನೆತ್ತವ
ನಾಡಿದರು ಮನ ನಲಿದು ಖಾಡಾ
ಖಾಡಿಯಲಿ ದುಗ ಬಾರ ಇತ್ತಿಗವೆಂಬ ರಭಸದಲಿ
ಬೇಡಿದರೆ ಬೀಳುವುದು ದಾಯದ
ರೂಢಿ ಜಳುಪಿಸೆ ಹೊಳೆವ ದಾಳದ
ರೂಢಿಗಚ್ಚರಿಯಾಗಿ ನಳನೃಪ ಗೆಲಿದು ಬೊಬ್ಬಿರಿದ ||೪೪||

ಖಿನ್ನನಾದನು ಪುಷ್ಕರನು ಹರು
ಷೋನ್ನತಿಯ ಬೀಳ್ಕೊಡಲು ಗುಣಸಂ
ಪನ್ನನೇರಿದ ರತ್ನಸಿಂಹಾಸನವ ನಳನೃಪತಿ
ಪನ್ನಗಾರಿಧ್ಜನ ಕೃಪೆ ನಿನ
ಗಿನ್ನು ಸಿದ್ಧಿಸಲೆಂದು ಮುನಿಜನ
ರುನ್ನತದಿ ಕೊಂಡಾಡಿ ಹರಸಿದರೆಲ್ಲ ಧರಣಿಪನ ||೪೫||

ಎಲೆ ಯುಧಿಷ್ಠಿರ ಕೇಳು ಲೋಕದ
ಲಲನೆಯರ ಪರಿಯಲ್ಲ ನಾಲ್ವರು
ಚೆಲುವೆಯರು ಗುಣಶೀಲಸಂಪನ್ನೆಯರು ಭುವನದಲಿ
ನಳಿನಮುಖಿ ದಮಯಂತಿ ಸೀತಾ
ಲಲನೆ ದ್ರೌಪದಿ ಚಂದ್ರಮತಿ ಕೋ
ಮಲೆಯರಚ್ಯುತನಚ್ಚುಮೆಚ್ಚಿನ ರಾಜವನಿತೆಯರು ||೬೭||

ನಿನಗೆ ಪಟ್ಟದ ಮಹಿಳೆ ದ್ರೌಪದಿ
ವನಿತೆಯರ ಸಾಮ್ರಾಜ್ಯಸಂಪದ
ವಿನಿತು ಸತಿಯಿಂದಾಗುವುದು ಕಾಮ್ಯಗಳು ಸಿದ್ಧಿಪುವು
ಜನಪ ಚಿಂತಿಸಬೇಡ ನಾಳಿನ
ದಿನದಿ ಬಹ ನಿನ್ನನುಜನರ್ಜುನ
ಮನದ ಚಿಂತೆಯ ಬೀಳುಕೊಡು ಸುಖಿಯಾಗು ನೀನೆಂದ ||೬೮||

ಮೇದಿನಿಯೊಳೀ ಪುಣ್ಯಚರಿತೆಯ
ನಾದರಿಸಿ ಬರೆದೋದಿ ಕೇಳುವ
ಸಾಧುಸಜ್ಜನರಾದವರಿಗಹುದಖಿಳ ಕೈವಲ್ಯ
ವೇದಗೋಚರ ಕೃಷ್ಣ ವರಪುರ
ದಾದಿಕೇಶವನಮರವಂದಿತ
ನಾದಿನಾರಾಯಣನು ಸಲಹುವನಖಿಳಸಜ್ಜನರ ||೭೨||

ನೋಡಿ ಸಂಪಾದಿಸಿ

ನಳಚರಿತ್ರೆ- ಸಂಧಿಗಳು>:

ನೋಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ